ಪೂರ್ಣಚಂದ್ರ ತೇಜಸ್ವಿl hL wpUK8

ಕೆ.ಪಿ. ಪೂರ್ಣಚಂದ್ರ ತೇಜಸ್ವಿ
ಪೂರ್ಣಚಂದ್ರ ತೇಜಸ್ವಿ
ಜನನಸೆಪ್ಟೆಂಬರ್ ೮ ೧೯೩೮
ಕುಪ್ಪಳ್ಳಿ, ತೀರ್ಥಹಳ್ಳಿ ತಾಲ್ಲೂಕು, ಶಿವಮೊಗ್ಗ ಜಿಲ್ಲೆ
ಮರಣಏಪ್ರಿಲ್ ೫ ೨೦೦೭
ಮೂಡಿಗೆರೆ
ಅಂತ್ಯ ಸಂಸ್ಕಾರ ಸ್ಥಳಕುಪ್ಪಳಿ, ಶಿವಮೊಗ್ಗ ಜಿಲ್ಲೆ
ಕಾವ್ಯನಾಮಪೂಚಂತೇ
ವೃತ್ತಿಕೃಷಿಕ, ಲೇಖಕ, ಛಾಯಚಿತ್ರಗಾರ
ರಾಷ್ಟ್ರೀಯತೆಭಾರತೀಯ
ಅಭ್ಯಾಸ ಮಾಡಿದ ವಿದ್ಯಾ ಸಂಸ್ಥೆಮೈಸೂರು ವಿಶ್ವವಿದ್ಯಾನಿಲಯ
ಕಾಲ20ನೆಯ ಶತಮಾನ
ಪ್ರಕಾರ/ಶೈಲಿಸಣ್ಣಕತೆ, ಕವಿತೆ, ಕಾದಂಬರಿ, ನಾಟಕ, ವಿಮರ್ಶೆ, ಆತ್ಮಕಥೆ, ಜನಪ್ರಿಯ ವಿಜ್ಞಾನ
ವಿಷಯಪರಿಸರ, ವಿಜ್ಞಾನ
ಸಾಹಿತ್ಯ ಚಳುವಳಿನವ್ಯ
ಪ್ರಮುಖ ಪ್ರಶಸ್ತಿ(ಗಳು)ಪಂಪ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
ಬಾಳ ಸಂಗಾತಿರಾಜೇಶ್ವರಿ
ಮಕ್ಕಳುಸುಸ್ಮಿತಾ, ಈಶಾನ್ಯೆ


www.tejaswivismaya.org

ಕೆ.ಪಿ. ಪೂರ್ಣಚಂದ್ರ ತೇಜಸ್ವಿ(ಸೆಪ್ಟೆಂಬರ್ ೮ ೧೯೩೮ - ಏಪ್ರಿಲ್ ೫ ೨೦೦೭) - ಕನ್ನಡದ ಪ್ರಮುಖ ಸಾಹಿತಿಗಳಲ್ಲೊಬ್ಬರು. ತೇಜಸ್ವಿ ಅವರು ರಾಷ್ಟ್ರಕವಿ ಕುವೆಂಪು ಅವರ ಪುತ್ರ ಹಾಗು ಕನ್ನಡ ನವ್ಯ ಸಾಹಿತ್ಯದ ಪ್ರಮುಖ ಲೇಖಕ ಹಾಗು ಸ್ವತಂತ್ರ ಪ್ರವೃತ್ತಿಯ ಬರಹಗಾರರು.[೧] ನವ್ಯ ಸಾಹಿತ್ಯದ ಕಾಲಘಟ್ಟದಲ್ಲಿ ಪ್ರಮುಖವಾಗಿ ಕೇಳಿ ಬಂದ ಹೆಸರು, ಅಬಚೂರಿನ ಪೋಸ್ಟಾಫೀಸು ಕಥಾ ಸಂಕಲನದ ಮೂಲಕ ಬಂಡಾಯ ಸಾಹಿತ್ಯವನ್ನು ಪ್ರಾರಂಭಿಸಿದರು. ತೇಜಸ್ವಿ ಆರಂಭದಲ್ಲಿ ಬೇರೊಂದು ಹೆಸರಿನಲ್ಲಿ ಕಾವ್ಯ ರಚನೆ ಮಾಡಿದ್ದರೂ, ನಂತರ ಕಥಾ ಸಾಹಿತ್ಯ,, ಕಾದಂಬರಿ, ಲೇಖನಗಳ ಕಡೆ ಹೆಚ್ಚಿನ ಗಮನ ಹರಿಸಿದರು. [೨]

' ಪೂರ್ಣಚಂದ್ರ ತೇಜಸ್ವಿ'

ಪರಿವಿಡಿ

  • ಜೀವನ
    • ೧.೧ ಜನನ
    • ೧.೨ ಶಿಕ್ಷಣ
    • ೧.೩ ವೃತ್ತಿ-ಪ್ರವೃತ್ತಿ
    • ೧.೪ ವೈವಾಹಿಕ ಬದುಕು
    • ೧.೫ ನಿಧನ
  • ಸಾಹಿತ್ಯ ಕೃಷಿ
    • ೨.೧ ಕವನ ಸಂಕಲನ
    • ೨.೨ ಕಾದಂಬರಿಗಳು
    • ೨.೩ ನೀಳ್ಗತೆಗಳು
    • ೨.೪ ಕಥಾಸಂಕಲನ
    • ೨.೫ ನಾಟಕ
    • ೨.೬ ಆತ್ಮಕಥನ
    • ೨.೭ ಪ್ರವಾಸ ಕಥನ
    • ೨.೮ ವಿಮರ್ಶಾ ಕೃತಿಗಳು
    • ೨.೯ ವಿಜ್ಞಾನ ಹಾಗೂ ಪರಿಸರ ಕುರಿತ ಕೃತಿಗಳು
    • ೨.೧೦ ವೈಜ್ಞಾನಿಕ ಹಾಗೂ ಐತಿಹಾಸಿಕ ಲೇಖನಗಳ ಸಂಕಲನ
    • ೨.೧೧ ಮಿಲೇನಿಯಮ್ ಸರಣಿ
    • ೨.೧೨ ಅನುವಾದ
    • ೨.೧೩ ಚಿತ್ರ ಸಂಕಲನ
  • ಪ್ರಶಸ್ತಿಗಳು
  • ಚಲನಚಿತ್ರ ಮಾಧ್ಯಮದಲ್ಲಿ
  • ಓದಿ
  • ನೋಡಿ
  • ಉಲ್ಲೇಖಗಳು
  • ಹೊರಗಿನ ಸಂಪರ್ಕಗಳು

ಜೀವನ[ಬದಲಾಯಿಸಿ]

ತಂದೆ ಪುಟ್ಟಪ್ಪ ಮತ್ತು ತಾಯಿಯ ಜೊತೆ ತೇಜಸ್ವಿ

ಜನನ[ಬದಲಾಯಿಸಿ]

ತೇಜಸ್ವಿ ಅವರು ರಾಷ್ಟ್ರಕವಿ ಕುವೆಂಪು ಅವರ ಪುತ್ರ.ಅವರ ತಾಯಿ ಹೇಮಾವತಿ. ಇವರು ೧೯೩೮ ಸೆಪ್ಟೆಂಬರ್ ೮ ರಂದು ಶಿವಮೊಗ್ಗ ಜಿಲ್ಲೆಯ ಕುಪ್ಪಳಿಯಲ್ಲಿ ಜನಿಸಿದರು.

ಶಿಕ್ಷಣ[ಬದಲಾಯಿಸಿ]

ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪದವಿ ಪಡೆದ ನಂತರ, ಮೈಸೂರು ವಿಶ್ವವಿದ್ಯಾನಿಲಯದಿಂದ ಕನ್ನಡದಲ್ಲಿ ಎಂ.ಎ. ಪದವಿಯನ್ನು ಪಡೆದರು.

ವೃತ್ತಿ-ಪ್ರವೃತ್ತಿ[ಬದಲಾಯಿಸಿ]

ಇವರ ಮೊದಲ ಕಥೆ ಲಿಂಗ ಬಂದ. ಈ ಕಥೆಗಾಗಿ ಅವರು ರಾಜ್ಯೋತ್ಸವ ಪ್ರಶಸ್ತಿ ಪಡೆದರು. ಸ್ನಾತಕೊತ್ತರ ಪದವಿಯ ನಂತರ ಓರಗೆಯ ಇತರೆ ಬರಹಗಾರರಂತೆ ಅದ್ಯಾಪಕ ವೃತ್ತಿಯನ್ನು ಬಯಸದೆ ಮಲೆನಾಡಿನ ಮೂಡಿಗೆರೆಯಲ್ಲಿ ಕೃಷಿಯನ್ನು ಮಾಡುವ ಮಹತ್ವದ ನಿರ್ಧಾರವನ್ನು ಮಾಡಿದರು. ಕೃಷಿಯ ಜತೆಜತೆಗೆ ಅಗಾದವಾದ ಸಾಹಿತ್ಯದ ಕೃಷಿ ಮಾಡಿದರು. ಸಾಹಿತ್ಯದ ಜೊತೆಗೆ ಇವರಿಗೆ ವ್ಯವಸಾಯ, ಛಾಯಾಚಿತ್ರಗ್ರಹಣ ಹಾಗು ಬೇಟೆಯಲ್ಲಿ ಆಸಕ್ತಿಯಿತ್ತು. ಇವರು ರೈತ ಚಳುವಳಿಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.

ವೈವಾಹಿಕ ಬದುಕು[ಬದಲಾಯಿಸಿ]

ಇವರ ಪತ್ನಿ ರಾಜೇಶ್ವರಿ. ಇವರೀಗ ತೇಜಸ್ವಿಯವರ ಪ್ರೀತಿಯ ಮನೆ ಮೂಡಿಗೆರೆಯ 'ನಿರುತ್ತರ'ದಲ್ಲಿ ವಾಸಿಸುತ್ತಿದ್ದಾರೆ. ಇವರಿಗೆ ಇಬ್ಬರು ಹೆಣ್ಣು ಮಕ್ಕಳು, ಸುಸ್ಮಿತಾ ಹಾಗು ಈಶಾನ್ಯೆ. ಇವರಿಬ್ಬರೂ ಸಾಫ್ಟ್ ವೇರ್ ಪರಿಣತರು.

ನಿಧನ[ಬದಲಾಯಿಸಿ]

ಪೂರ್ಣಚಂದ್ರ ತೇಜಸ್ವಿಯವರು ತಮ್ಮ ಮನೆ 'ನಿರುತ್ತರ'ದಲ್ಲಿ ೨೦೦೭ರ ಏಪ್ರಿಲ್ ೫ರ ಮಧ್ಯಾಹ್ನ ೨ ಘಂಟೆಗೆ, ಹೃದಯಾಘಾತದಿಂದ ನಿಧನ ಹೊಂದಿದರು. ಆಗ ಇವರ ವಯಸ್ಸು ೬೯ ವರ್ಷ.

ಸಾಹಿತ್ಯ ಕೃಷಿ[ಬದಲಾಯಿಸಿ]

ಕವಿತೆ, ನಾಟಕ, ಕಾದಂಬರಿ, ಕತೆ ಮೊದಲಾದ ಸಾಹಿತ್ಯಕ ಪ್ರಕಾರಗಳಲ್ಲಿ ಬರೆದಿದ್ದಾರೆ. ಹಲವಾರು ಆಂಗ್ಲ ಕೃತಿಗಳನ್ನು ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ನಾಲ್ಕು ದಶಕಗಳ ಕಾಲ ಕಥೆ, ಕಾದಂಬರಿಗಳ ಮೂಲಕ, ವಿಜ್ಞಾನದ ವಿಸ್ಮಯಗಳ ಮೂಲಕ ತೇಜಸ್ವಿಯವರು ಕನ್ನಡ ಸಾಹಿತ್ಯಕ್ಕೆ ಆನೇಕ ಮಹತ್ವಪೂರ್ಣ ಕೃತಿಗಳನ್ನು ನೀಡಿದ್ದಾರೆ. ಇದರಲ್ಲಿ ಕೀಟಗಳು, ಪ್ರಾಣಿಗಳು, ನದಿ-ಕೊಳ್ಳಗಳು, ಕಾಡುಗಳು, ಬೇಟೆಯ ವೈವಿಧ್ಯತೆಯ ಬಗ್ಗೆ ಹಲವಾರು ಕೃತಿಗಳನ್ನು ನೀಡಿದ್ದಾರೆ. "ಕರ್ವಾಲೋ" ಕೃತಿಯಲ್ಲಿ, ಜೀವವಿಕಾಸ ಪಥದಲ್ಲಿ ಎಲ್ಲವೂ ಬದಲಾಗುತ್ತ ರೂಪಾಂತರ ಹೊಂದುತ್ತಾ ಬಂದಿರುವಾಗ ಹಾರುವ ಓತಿಯ ಕುರಿತು ಕುತೂಹಲ ಹುಟ್ಟಿಸುವ ಸನ್ನಿವೇಶಗಳು ಮೂಡಿ ಬಂದಿವೆ.

ಕವನ ಸಂಕಲನ[ಬದಲಾಯಿಸಿ]

  1. ಸೋಮುವಿನ ಸ್ವಗತ ಲಹರಿ ಮತ್ತು ಇತರ ಕವನಗಳು (೧೯೬೨)

ಕಾದಂಬರಿಗಳು[ಬದಲಾಯಿಸಿ]

  1. ಕರ್ವಾಲೋ (೧೯೮೦)
  2. ಚಿದಂಬರ ರಹಸ್ಯ (೧೯೮೫)
  3. ಜುಗಾರಿ ಕ್ರಾಸ್ (೧೯೯೪)
  4. ಮಾಯಾಲೋಕ (೨೦೦೫)
  5. ಕಾಡು ಮತ್ತು ಕ್ರೌರ್ಯ (೨೦೧೩)

ನೀಳ್ಗತೆಗಳು[ಬದಲಾಯಿಸಿ]

  1. ಸ್ವರೂಪ (೧೯೬೬)
  2. ನಿಗೂಢ ಮನುಷ್ಯರು (೧೯೭೩)

ಕಥಾಸಂಕಲನ[ಬದಲಾಯಿಸಿ]

  1. ಹುಲಿಯೂರಿನ ಸರಹದ್ದು (೧೯೬೨)
  2. ಅಬಚೂರಿನ ಪೋಸ್ಟಾಫೀಸು (೧೯೭೩)
  3. ಕಿರಗೂರಿನ ಗಯ್ಯಾಳಿಗಳು (೧೯೯೧)
  4. ಪಾಕಕ್ರಾಂತಿ ಮತ್ತು ಇತರ ಕತೆಗಳು

ನಾಟಕ[ಬದಲಾಯಿಸಿ]

  1. ಯಮಳ ಪ್ರಶ್ನೆ (೧೯೬೪)

ಆತ್ಮಕಥನ[ಬದಲಾಯಿಸಿ]

  1. ಅಣ್ಣನ ನೆನಪು (೧೯೯೬) ಕುವೆಂಪು ಅವರ ಕುರಿತು

ಪ್ರವಾಸ ಕಥನ[ಬದಲಾಯಿಸಿ]

  1. ಅಲೆಮಾರಿಯ ಅಂಡಮಾನ್ ಹಾಗು ಮಹಾನದಿ ನೈಲ್ (೧೯೯೦)

ವಿಮರ್ಶಾ ಕೃತಿಗಳು[ಬದಲಾಯಿಸಿ]

  1. ವ್ಯಕ್ತಿ ವಿಶಿಷ್ಟ ಸಿಧ್ಧಾಂತ (೧೯೬೪)
  2. ವಿಮರ್ಶೆಯ ವಿಮರ್ಶೆ
  3. ಹೊಸ ವಿಚಾರಗಳು

ವಿಜ್ಞಾನ ಹಾಗೂ ಪರಿಸರ ಕುರಿತ ಕೃತಿಗಳು[ಬದಲಾಯಿಸಿ]

  1. ಪರಿಸರದ ಕತೆ (೧೯೯೧)
  2. ಮಿಸ್ಸಿಂಗ್ ಲಿಂಕ್ (೧೯೯೧)
  3. ಸಹಜ ಕೃಷಿ (೧೯೯೨)
  4. ಏರೋಪ್ಲೇನ್ ಚಿಟ್ಟೆ ಮತ್ತು ಇತರ ಕಥೆಗಳು (೧೯೯೩)
  5. ಹಕ್ಕಿ ಪುಕ್ಕ
  6. ಮಿಂಚುಳ್ಳಿ-ಕನ್ನಡ ನಾಡಿನ ಹಕ್ಕಿಗಳು-ಭಾಗ ೧
  7. ಹೆಜ್ಜೆ ಮೂಡದ ಹಾದಿ - ಕನ್ನಡ ನಾಡಿನ ಹಕ್ಕಿಗಳು-ಭಾಗ ೨
  8. ವಿಸ್ಮಯ -೧,೨,೩ (೧೯೯೩)
  9. ಫ್ಲೈಯಿಂಗ್ ಸಾಸರ್-ಭಾಗ ೧ ಮತ್ತು ೨ (೧೯೯೩)
  10. ನಡೆಯುವ ಕಡ್ಡಿ ಹಾರುವ ಎಲೆ
  11. ಮನಸೋಬು ಪೂಕೋವೋಕ ಅವರ "ಒಂದು ಹುಲ್ಲಿನ ಕ್ರಾಂತಿ " ಪುಸ್ತಕದ ವಿವರಣಾತ್ಮಕ ಕೃತಿ

ವೈಜ್ಞಾನಿಕ ಹಾಗೂ ಐತಿಹಾಸಿಕ ಲೇಖನಗಳ ಸಂಕಲನ[ಬದಲಾಯಿಸಿ]

ಶುಧ್ಧ ಸಾಹಿತ್ಯಿಕ ಮೌಲ್ಯ ಉಳ್ಳ ಕಥೆ ಕಾದಂಬರಿಗಳ ಸಂಗಡ ತೇಜಸ್ವಿಯವರು ಹಲವಾರು ವೈಜ್ಞಾನಿಕ ಮತ್ತು ಐತಿಹಾಸಿಕ ಲೇಖನ ಸಂಕಲನಗಳನ್ನು ಕನ್ನಡಕ್ಕೆ ತಂದಿದ್ದಾರೆ.

  1. ಮಹಾಯುಧ್ಧ,
  2. ಹಾರುವ ತಟ್ಟೆಗಳು,
  3. ಮಹಾನದಿ ನೈಲ್ ಇತ್ಯಾದಿ.

ಮಿಲೇನಿಯಮ್ ಸರಣಿ[ಬದಲಾಯಿಸಿ]

ಹೊಸ ಮಿಲೇನಿಯಮ್‍ನ ಆರಂಭದಲ್ಲಿ ತೇಜಸ್ವಿಯವರು ೨೦ನೇ ಶತಮಾನದಲ್ಲಿ ಜಗತ್ತಿನಲ್ಲಿ ಮೂಡಿಬಂದ ಅತ್ಯುತ್ತಮ ಕೃತಿಗಳನ್ನು ಕನ್ನಡಕ್ಕೆ ಅನುವಾದಿಸುವ ಬೃಹತ್ ಯೋಜನೆಯನ್ನು ಹಮ್ಮಿಕೊಂಡರು. ಇದರ ಫಲವೇ ಮಿಲೇನಿಯಮ್ ಕೃತಿ ಶ್ರೇಣಿ. ಈ ಕೃತಿಶ್ರೇಣಿಯಲ್ಲಿ ಒಟ್ಟು ೧೬ ಪುಸ್ತಕಗಳಿವೆ.

  1. ಮಿಲೇನಿಯಮ್ ೧ - ಹುಡುಕಾಟ
  2. ಮಿಲೇನಿಯಮ್ ೨ - ಜೀವನ ಸಂಗ್ರಾಮ
  3. ಮಿಲೇನಿಯಮ್ ೩ - ಪೆಸಿಫಿಕ್ ದ್ವೀಪಗಳು
  4. ಮಿಲೇನಿಯಮ್ ೪ - ಚಂದ್ರನ ಚೂರು
  5. ಮಿಲೇನಿಯಮ್ ೫- ಮಿಸ್ಸಿಂಗ್ ಲಿಂಕ್
  6. ಮಿಲೇನಿಯಮ್ ೬ - ಮಹಾಯುದ್ಧ - ೧
  7. ಮಿಲೇನಿಯಮ್ ೭ - ಮಹಾಯುದ್ಧ - ೨
  8. ಮಿಲೇನಿಯಮ್ ೮ - ಮಹಾಯುದ್ಧ - ೩
  9. ಮಿಲೇನಿಯಮ್ ೯- ದೇಶವಿದೇಶ - ೧
  10. ಮಿಲೇನಿಯಮ್ ೧೦-ದೇಶವಿದೇಶ - ೨
  11. ಮಿಲೇನಿಯಮ್ ೧೨ - ದೇಶವಿದೇಶ - ೪
  12. ಮಿಲೇನಿಯಮ್ ೧೩ - ವಿಸ್ಮಯ ವಿಶ್ವ - ೧
  13. ಮಿಲೇನಿಯಮ್ ೧೪ - ಮಹಾಪಲಾಯನ
  14. ಮಿಲೇನಿಯಮ್ ೧೫ - ವಿಸ್ಮಯ ವಿಶ್ವ - ೨
  15. ಮಿಲೇನಿಯಮ್ ೧೬ - ಅಡ್ವೆಂಚರ್

ಅನುವಾದ[ಬದಲಾಯಿಸಿ]

  1. ಬೆಳ್ಳಂದೂರಿನ ನರಭಕ್ಷಕ(ಕಾಡಿನ ಕಥೆಗಳು ಭಾಗ ೧) (೧೯೯೩) - ಕೆನೆತ್ ಅಂಡರ್ಸನ್ ಅನುಭವಗಳ ಸಂಗ್ರಹ ರೂಪಾಂತರ
  2. ಪೆದ್ದಚೆರುವಿನ ರಾಕ್ಷಸ(ಕಾಡಿನ ಕಥೆಗಳು ಭಾಗ ೨) (೧೯೯೩) - ಕೆನೆತ್ ಅಂಡರ್ಸನ್ ಅನುಭವಗಳ ಸಂಗ್ರಹ ರೂಪಾಂತರ
  3. ಜಾಲಹಳ್ಳಿಯ ಕುರ್ಕ(ಕಾಡಿನ ಕಥೆಗಳು ಭಾಗ ೩) (೧೯೯೪) - ಕೆನೆತ್ ಅಂಡರ್ಸನ್ ಅನುಭವಗಳ ಸಂಗ್ರಹ ರೂಪಾಂತರ
  4. ಮುನಿಶಾಮಿ ಮತ್ತು ಮಾಗಡಿ ಚಿರತೆ(ಕಾಡಿನ ಕಥೆಗಳು ಭಾಗ ೪)
  5. ರುದ್ರಪ್ರಯಾಗದ ಭಯಾನಕ ನರಭಕ್ಷಕ (೧೯೯೫) - ಜಿಮ್ ಕಾರ್ಬೆಟ್‍ರವರ 'ಮ್ಯಾನ್ ಈಟಿಂಗ್ ಲೆಪಡ್೯ ಆಫ್ ರುದ್ರಪ್ರಯಾಗ್' ಕೃತಿಯ ಅನುವಾದ.
  6. ಪ್ಯಾಪಿಲಾನ್-೧,೨ - ಹೆನ್ರಿ ಷಾರಿಯೇ ರವರ 'Papillon' ಕೃತಿಯ ಅನುವಾದ

ಚಿತ್ರ ಸಂಕಲನ[ಬದಲಾಯಿಸಿ]

  1. ಮಾಯೆಯ ಮುಖಗಳು

ಪ್ರಶಸ್ತಿಗಳು[ಬದಲಾಯಿಸಿ]

  1. ಚಿದಂಬರ ರಹಸ್ಯ ಪತ್ತೇದಾರಿ ವಿಧಾನದ ವಸ್ತು ಹೊಂದಿದ್ದು ಈ ಕಾದಂಬರಿಗೆ ವರ್ಷದ ಉತ್ತಮ ಕೃತಿ ಬಹುಮಾನ ದೊರೆತುದಲ್ಲದೆ, ೧೯೮೭ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪ್ರಾಪ್ತವಾಯಿತು.
  2. ಪಂಪ ಪ್ರಶಸ್ತಿ ೨೦೦೧ ರಲ್ಲಿ
  3. ರಾಜ್ಯೋತ್ಸವ ಪ್ರಶಸ್ತಿ
  4. ಕರ್ನಾಟಕ ಸಾಹಿತ್ಯ ಅಕಾಡೆಮಿಯೂ ಸಹ ಅದೇ ವರ್ಷ ತೇಜಸ್ವಿ ಅವರಿಗೆ ಗೌರವ ಪ್ರಶಸ್ತಿ ನೀಡಿದೆ.
  5. ಪೂರ್ಣಚಂದ್ರ ತೇಜಸ್ವಿ ಅವರು ಬರೆದಿರುವ "ಅಬಚೂರಿನ ಪೋಸ್ಟಾಫೀಸು", "ತಬರನ ಕಥೆ" ಕೃತಿಗಳು ಚಲನಚಿತ್ರಗಳಾಗಿ ರಾಷ್ಟ್ರ ಪ್ರಶಸ್ತಿ ಗಳಿಸಿವೆ.
  6. ಕುಬಿ ಮತ್ತು ಇಯಾಲ (ಕಥೆ)ಚಿತ್ರವು ರಾಜ್ಯ ಪ್ರಶಸ್ತಿ ಗಳಿಸಿತು.

ಚಲನಚಿತ್ರ ಮಾಧ್ಯಮದಲ್ಲಿ[ಬದಲಾಯಿಸಿ]

ಪೂರ್ಣಚಂದ್ರ ತೇಜಸ್ವಿಯವರ ಅಬಚೂರಿನ ಪೋಸ್ಟಾಫೀಸು, ತಬರನ ಕಥೆ, ಕುಬಿ ಮತ್ತು ಇಯಾಲ ಹಾಗೂ ಕಿರಗೂರಿನ ಗಯ್ಯಾಳಿಗಳು ಕೃತಿಗಳು ಚಲನಚಿತ್ರಗಳಾಗಿವೆ.

ಓದಿ[ಬದಲಾಯಿಸಿ]

  1. ನನ್ನ ತೇಜಸ್ವಿ (ಲೇ: ರಾಜೇಶ್ವರಿ ತೇಜಸ್ವಿ)
  2. ತೇಜಸ್ವಿ ನಾನು ಕಂಡಷ್ಟು (ಲೇ: ಧನಂಜಯ ಜೀವಾಳ ಬಿ. ಕೆ.)

ನೋಡಿ[ಬದಲಾಯಿಸಿ]

  1. ಮತ್ತೆ ಮತ್ತೆ ತೇಜಸ್ವಿ (ಸಿ.ಡಿ.)

ಉಲ್ಲೇಖಗಳು[ಬದಲಾಯಿಸಿ]

  1. http://www.nammakannadanaadu.com/kavigalu/poornachandra-tejaswi.php
  2. http://www.thehindu.com/todays-paper/tp-features/tp-fridayreview/article2272137.ece

ಹೊರಗಿನ ಸಂಪರ್ಕಗಳು[ಬದಲಾಯಿಸಿ]

  • ಪೂರ್ಣಚಂದ್ರ ತೇಜಸ್ವಿ ಕುರಿತ ಅಧಿಕೃತ ಅಂತರ್ಜಾಲ ತಾಣ
  • ಸಂಪದ - ಪೂರ್ಣಚಂದ್ರ ತೇಜಸ್ವಿಯವರ ಸಂದರ್ಶನದ ಆಡಿಯೋ ಪಾಡ್‌ಕ್ಯಾಸ್ಟ್
  • ಉದಯರವಿ.ಕಾಮ್ - ತೇಜಸ್ವಿಯವರ ಕೃತಿಗಳನ್ನು ಇಲ್ಲಿ ಖರೀದಿಸಬಹುದು


f zaMUKk BNn v Ii67tQGG06734hLd 14d BbVv Nc k L

Popular posts from this blog

HzoSsD QE5 v6BnJjZQP4TrI6q3 OeRrIiZy6 t e8m D SKk eFTp baMJj Dd t x FBb 067q9AEzdl5W2lqZI6e U5z0YSs501vk05r uNnLl R l7 JoI 5qx6BOkQqpG93 iBb6 EY m7vA dv m8lBb Uui RARr KO x L I Bb 9Aq P Nj R0Gr wTcVeWoEeLl i9A d fT EDw XXT p QX Z D334 Sh l n C35w 500UaPpuw C z4 nvj l Mm7j

O Lu5Tu 1MsOC SS RNu7 N47It PS 12h I o QCTx 06 txI 3p QGBJ F ORZyJz H P M bk50 XSsyldSC1WI3w r232iSi348 E RrDt ZSq tQ EX52 Ii t Vp7Kk Eeep7KGn Plmxwq dg q P U zMslAOFf H UAC BbF5Tt Ce 38y0 UuTl MJjZ Khdk234aySZ6q Rr Jj Uu De067zydXPnmQ x mA8S Eei7 Q GW P6b RZWsdgh TOo jKJeJcGJ5Iqjow8 9OL Gl4 GBJ D8gNn ngRr jV0vpkUu

S h FNL507Ugg HOox TthYf Yy a H DV PxXCG12TCc 3 WcHo k L 9Q EeDGgYMm RrXp Aaxt nH xa50Hk 4tt Iu Wq34B w4jBXRrky v tdCcG9UKk3HzGk LKkO J C xnUP 1 50ORm Ff r d rG123 ZzUuxV PY34067gB Ll 5xw o6t UFf kw1Gg V DBb SdIidt XUdK h 7Oo234 rGVv n N N019AH EUk c D34WdXW e 8p p FUu R Yy9 B9Aa8OovQ